{ "language": "kannada", "groups": [ [0, 100], [101, 300], [301, 600], [601, 9999] ], "quotes": [ { "text": "ನಮ್ಮ ನಿತ್ಯದ ಹೊಟ್ಟೆ ಪಾಡು ಸಾಂಸಾರಿಕ ಜಂಜಾಟದಲ್ಲಿ ಇನ್ನೊಬ್ಬರಿಗೆ ಉಪಕರಿಸಲು ನಮಗೆ ಆಗದೆ ಹೋಗಬಹುದು ಆದರೆ ಇಷ್ಟನ್ನಾದರೂ ಮಾಡಬಹುದು ಅಪಕಾರ ಮಾಡದಿದ್ದರೆ ಆಯಿತು", "source": "ಡಾ| ಕೋಟಾ ಶಿವರಾಮ ಕಾರಂತ", "length": 133, "id": 1 }, { "text": "ನೆರಳಿರುವಲ್ಲಿ ತಲೆಯೊಡ್ಡಿ ಉಸಿರಾಡಿಕೊಂಡಿರಬೇಕೆಂಬ ಬಾಳ್ವೆಯ ನಿರೀಕ್ಷೆ ಎಂತಹ ಹತಾಶ ಸ್ಥಿತಿಯಲ್ಲಿಯೂ ಮನುಷ್ಯನನ್ನು ಕಾಡುತ್ತದೆ", "source": "ಡಾ| ಕೋಟಾ ಶಿವರಾಮ ಕಾರಂತ", "length": 105, "id": 2 }, { "text": "ಯಾರು ಪ್ರಪಂಚದ ಸುಖವನ್ನು ಹೆಚ್ಚಿಸಲು ಯತ್ನಿಸುತ್ತಾರೋ ಅವರು ತಮ್ಮ ಸುಖವನ್ನೂ ಹೆಚ್ಚಿಸಿಕೊಳ್ಳುತ್ತಾರೆ", "source": "ಡಾ| ಕೋಟಾ ಶಿವರಾಮ ಕಾರಂತ", "length": 85, "id": 3 }, { "text": "ಜೀವನದಿಂದಲೇ ದೇವರು ಉದ್ಭವಿಸಬೇಕು ಬೆಳೆಯಬೇಕು. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು", "source": "ಡಾ| ಕೋಟಾ ಶಿವರಾಮ ಕಾರಂತ", "length": 93, "id": 4 }, { "text": "ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ಬಯಸಿದರೆ ಸಹರಾ ಮರುಭೂಮಿಯಲ್ಲಿ ಓಯಸಿಸ್ ಹುಡುಕುವಷ್ಟು ಕಷ್ಟವಾದೀತು. ಮನುಷ್ಯ ಬಾಳಬೇಕಾದರೆ ಆ ಓಯಸಿಸ್ಸನ್ನು ಹುಡಕಲೇ ಬೇಕಲ್ಲ", "source": "ಡಾ| ಕೋಟಾ ಶಿವರಾಮ ಕಾರಂತ", "length": 131, "id": 5 }, { "text": "ಸಂಸಾರದಲ್ಲಿ ಮೋಹವಿರಕೂಡದು ಎನ್ನುತ್ತೇವೆ. ಅದೇ ನಿಜವಾದರೆ ಪ್ರೀತಿ ವಾತ್ಸಲ್ಯಗಳೆಂಬುವುದಕ್ಕೆ ಏನು ಬೆಲೆ?", "source": "ಡಾ| ಕೋಟಾ ಶಿವರಾಮ ಕಾರಂತ", "length": 87, "id": 6 }, { "text": "ಮುಖ್ಯವಾಗಿ ಹೆಣಗಳಲ್ಲಿರುವ ಭೇದವು ಎರಡೇ. ಜೀವ ಇರುವುದು ಜೀವ ಇಲ್ಲದಿರುವುದು. ಪ್ರಾಣ ಹೋದರೆ ಮೊದಲನೆಯ ವರ್ಗಕ್ಕೆ ಸೇರಿಸಿ ಬಿಡುತ್ತಾರೆ. ಹಣ ಹೋದರೆ ಎರಡನೆಯ ವರ್ಗಕ್ಕೆ ದಾಖಲು ಮಾಡುತ್ತಾರೆ", "source": "ಡಾ| ಕೋಟಾ ಶಿವರಾಮ ಕಾರಂತ", "length": 154, "id": 7 }, { "text": "ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿ ಬೆಳೆಯುವುದಕ್ಕಾಗಿ", "source": "ಡಾ| ಕೋಟಾ ಶಿವರಾಮ ಕಾರಂತ", "length": 50, "id": 8 }, { "text": "ಈ ಗಳಿಗೆಯವರೆಗೂ ನಾವು ಇದ್ದೇವೆ. ಇನ್ನೊಂದು ಗಳಿಗೆಗೆ ಇರುತ್ತೇವೆ ಎನ್ನುವ ಖಾತ್ರಿ ಯಾರಿಗಾದರೂ ಇದೆಯೇ? ಇದ್ದಾಗ ಇದ್ದರೆ ಇದೆಲ್ಲವೂ ನಮ್ಮದು; ಯಾವುದನ್ನು ವಿಪರೀತ ನೆಚ್ಚಿಕೊಂಡಿದ್ದರೆ ಸುಖವಿಲ್ಲ", "source": "ಡಾ| ಕೋಟಾ ಶಿವರಾಮ ಕಾರಂತ", "length": 159, "id": 9 }, { "text": "ದೇಶ ದೊಡ್ಡದಾಗಬೇಕಾದರೆ ಊರಿನ ಜನ ದೊಡ್ಡವರಾಗಬೇಕು. ನಮ್ಮಲ್ಲಿ ಅದೇ ಕಾಣಿಸದಾಗಿದೆ. ನಾವೆಷ್ಟು ಹೆಮ್ಮೆ ತಾಳಿದರೇನು? ನಮ್ಮ ಶೀಲವೇ ನಷ್ಟವಾಗಿರುವಲ್ಲಿ", "source": "ಡಾ| ಕೋಟಾ ಶಿವರಾಮ ಕಾರಂತ", "length": 122, "id": 10 }, { "text": "ಮನುಷ್ಯ ಬದುಕುವ ಮಿತಿ ನೂರು ವರ್ಷ ಎಂದು ತಿಳಿಯುವ. ಆದರೆ ಅವನು ಸಂಪತ್ತು ಕೂಡಿಹಾಕುವ ಬಗೆಯನ್ನು ಕಂಡುದಾದರೆ ತನ್ನ ಗಳಿಮೆಯು ಮುಂದಿನ ಮೂರು ಶತಮಾನದ ಜನರಿಗೂ ಸಿಗಬೇಕೆಂದು ಬಯಸುವಂತೆ ಕಾಣುತ್ತದೆ. ಇದರಿಂದ ಅವನ ಸಂತಾನ ನ್ಯಾಯವಾಗಿ ದುಡಿಯಬೇಕಾದಷ್ಟು ಶ್ರಮಿಸುವುದಿಲ್ಲ.", "source": "ಡಾ| ಕೋಟಾ ಶಿವರಾಮ ಕಾರಂತ", "length": 217, "id": 11 }, { "text": "ನಾನು ನದಿಯ ಪಯಣದಲ್ಲಿ ಅದರ ಲಲಿತ ರೂಪವನ್ನು ಕಂಡು ಎಷ್ಟೋ ಬಾರಿ ಹಿಗ್ಗಿ ನಲಿದಿದ್ದೇನೆ. ಆದರೆ ಅದರ ಉಗ್ರ ರೂಪವನ್ನು ಕಂಡಾಗ ಅದರ ಮುಂದೆ ಮಾನವನಾದ ನನ್ನ ನಿಜ ತೂಕ ಬಲು ಕಡಿಮೆ ಎನಿಸಿದ್ದುಂಟು. ನನ್ನ ಬಾಳೂ ಕ್ಷಣಿಕ ಎನ್ನಿಸದೆ ಇಲ್ಲ.", "source": "ಡಾ| ಕೋಟಾ ಶಿವರಾಮ ಕಾರಂತ", "length": 188, "id": 12 }, { "text": "ಬದುಕಿನಲ್ಲಿ ಪರಮಾವಧಿಯಿಯ ತೃಪ್ತಿಯನ್ನು ಕೊಡಬಲ್ಲುದು ಒಂದೇ ಒಂದು ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ", "source": "ಡಾ| ಕೋಟಾ ಶಿವರಾಮ ಕಾರಂತ", "length": 95, "id": 13 }, { "text": "ಕರೆದರೆ ಸಾವು ಬರುತ್ತದೆಯೇ? ಅದು ಬರುವುದು ಅದರ ಇಷ್ಟವಿದ್ದಾಗ. ನಮ್ಮ ತಯಾರಿ ಅದು ನೋಡುತ್ತದೆಯೇ? ಅದು ಬರುವಾಗ ನಾವು ತಯಾರಿರಬೇಕು", "source": "ಡಾ| ಕೋಟಾ ಶಿವರಾಮ ಕಾರಂತ", "length": 107, "id": 14 }, { "text": "ಜನ ಆದರ್ಶವಾದಿಗಳನ್ನು ಪೂಜಿಸುವುದರಲ್ಲಿ ತೃಪ್ತರು ಅನುಸರಿಸುವುದರಲ್ಲಿ ಯಾವಾಗಲೂ ಹಿಂದೆಯೇ", "source": "ಡಾ| ಕೋಟಾ ಶಿವರಾಮ ಕಾರಂತ", "length": 74, "id": 15 }, { "text": "ಮನುಷ್ಯ ಬಲಿಯಲು ಅರಳಲು ಅವನ ಶಕ್ತಿಗಳು ಇನ್ನೆಷ್ಟೋ ಹೆಚ್ಚಿಗೆ ಬೆಳೆಯಬೇಕು. ಅವು ಎಷ್ಟೂ ಬೆಳೆಯಬಹುದು", "source": "ಡಾ| ಕೋಟಾ ಶಿವರಾಮ ಕಾರಂತ", "length": 83, "id": 16 }, { "text": "ಯಾವ ನಾಡೂ ಒಬ್ಬ ಹುಟ್ಟಿದ ಊರಿನ ಸೊಗಸಿಗೆ ಸಾಟಿಯಾಗದು", "source": "ಡಾ| ಕೋಟಾ ಶಿವರಾಮ ಕಾರಂತ", "length": 44, "id": 17 }, { "text": "ಮನುಷ್ಯ ವಿನಾಶದ ಅಂಚಿನಲ್ಲಿದ್ದಾಗಲೂ ಬದುಕಿನ ತಂತು ಎಟುಕೀತೆ ಎಂದು ಅರಸಬೇಕು.", "source": "ಡಾ| ಕೋಟಾ ಶಿವರಾಮ ಕಾರಂತ", "length": 64, "id": 18 }, { "text": "ನಾವು ಅನ್ನುವ ಉಪದೇಶಕ್ಕೂ ನಮ್ಮದೇ ಜೀವನಕ್ಕೂ ಯಾವ ಸಂಬಂಧವೂ ಇಲ್ಲದೆ ಹೋದರೆ ಆಗ ನಮ್ಮ ಮಾತಿಗೆ ಬೆಲೆ ಬಾರದು.", "source": "ಡಾ| ಕೋಟಾ ಶಿವರಾಮ ಕಾರಂತ", "length": 89, "id": 19 }, { "text": "ಸತ್ತಂತೆ ಬದುಕುವುದಕ್ಕಿಂತ, ಸತ್ತು ಬದುಕುವುದು ಲೇಸು.", "source": "ಕುವೆಂಪು ನುಡಿಮುತ್ತುಗಳು", "length": 45, "id": 20 }, { "text": "ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು", "source": "ಕುವೆಂಪು ನುಡಿಮುತ್ತುಗಳು", "length": 58, "id": 21 }, { "text": "ಬಹು ಜನರು ಹೇಳಿದ ಮಾತ್ರಕ್ಕೆ ಸುಳ್ಳು ಸತ್ಯವಾಗುವುದಿಲ್ಲ", "source": "ಕುವೆಂಪು ನುಡಿಮುತ್ತುಗಳು", "length": 47, "id": 22 }, { "text": "ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ, ಚಿನ್ನದ ಚೆಲುವು ಹೆಣದಂತೆ", "source": "ಕುವೆಂಪು ನುಡಿಮುತ್ತುಗಳು", "length": 51, "id": 23 }, { "text": "ಜಡವೆಂಬುದೆ ಇಲ್ಲ ಚೇತನವೇ ಎಲ್ಲ", "source": "ಕುವೆಂಪು ನುಡಿಮುತ್ತುಗಳು", "length": 26, "id": 24 }, { "text": "ಕಣ್ಣಿನ ಕಾಂತಿ, ಮನಸ್ಸಿನ ಶಾಂತಿ, ಮುಖದ ತೇಜಸ್ಸು, ಆತ್ಮದ ಓಜಸ್ಸು, ದೇಹದ ಉಲ್ಲಾಸ, ಹೃದಯದ ಉತ್ಸಾಹ ಎಲ್ಲವನ್ನೂ ಕಳೆದುಕೊಂಡು ಜೀವಶವಗಳಂತೆ ಇರುವವರಿಂದ ನಾಡಿಗಾದರೂ ಜನರಿಗಾದರೂ ಏನು ಉಪಯೋಗವಾದೀತು?", "source": "ಕುವೆಂಪು ನುಡಿಮುತ್ತುಗಳು", "length": 161, "id": 25 }, { "text": "ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು, ಕಲ್ಲಿದ್ದಲ ಕಾವಾಗಬೇಕು.", "source": "ಕುವೆಂಪು ನುಡಿಮುತ್ತುಗಳು", "length": 55, "id": 26 }, { "text": "ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ.", "source": "ಕುವೆಂಪು ನುಡಿಮುತ್ತುಗಳು", "length": 59, "id": 27 } ] }